ರಂಗತಿರಂಗ....
ಈ ಚಲನಚಿತ್ರ ನೋಡುವವರಿಗೆ ಒಂದು ಸೂಚನೆ. ಚಿತ್ರವನ್ನು ನೋಡುತ್ತ ಯಾವುದೋ ಫೋನ ಕರೆಗೋ ಇಲ್ಲಾ ಪ್ರಕೃತಿ ಕರೆಗೋ ನೀವು ಒಂದೈದು ನಿಮಿಷ ಹೊರಗೆ ಹೋಗಿ ಬಂದರೆ, ಮತ್ತೇ ಚಿತ್ರಕಥೆಗೆ ಹೊಂದಿಕೊಳ್ಳುವುದು ಬಲು ಕಷ್ಟ, ಯಾಕೆಂದರೆ ಕ್ಷಣ-ಕ್ಷಣಕ್ಕೂ ಊಹಿಸಲಾಗದಂತ ತಿರುವುಗಳಿಂದ ನೋಡುಗನನ್ನು ತನ್ನ ಸುಳಿಯಲ್ಲಿ ಬಂಧಿಸುತ್ತಾ ಸಾಗುತ್ತದೆ ಕಥೆ. ನನಗೂ ಸೀಟಿನಿಂದ ಏಳದೇ , ಕಣ್ಣು ಮತ್ತು ಮಿದುಳಿಗೆ ಕಸರತ್ತು ಕೊಡುತ್ತಾ ಕಥೆಯ ಜಾಡಿಗೆ ಹೊಂದುತ್ತಾ ಹೋಗುವ ಒತ್ತಡ ನಿರ್ಮಾಣವಾಗಿ, ಬೇರೆಲ್ಲ ಒತ್ತಡಗಳನ್ನು ತಾತ್ಕಾಲಿಕವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಥಿತಿ ಉದ್ಭವವಾಯಿತು. ಮೊದಮೊದಲು ಕಥೆಯು ನೋಡುಗನನ್ನು ಗೊಂದಲಕ್ಕೀಡು ಮಾಡಿ ಸಾಗಿದರೂ, ಬರಬರುತ್ತಾ ಕಥೆಯ ಎಳೆಗಳು ಒಂದೊಂದಾಗಿ ಬಿಚ್ಚಿ, ಈ ಗೊಂದಲವನ್ನು ದೂರ ಮಾಡಿ, 'ಓಹ್'...'ಅಬ್ಬಾ...' 'ಹೀಗೂ ಉಂಟೇ?' ಅನ್ನೋ ಆಶ್ಚರ್ಯ ಉವಾಚಗಳನ್ನು ತನಗರಿವಿಲ್ಲದೇ ಧಾರಾಳವಾಗಿ ಹೊರಹೊಮ್ಮುವಂತೆ ಮಾಡಿ ಚಿತ್ರ ಮುಕ್ತಾಯವಾಗುತ್ತದೆ, ಅದರ ನಂತರ ನಿಮ್ಮ ಬೇರೆ ಒತ್ತಡಗಳತ್ತ ಗಮನ ಹರಿಸಬಹುದು. ರಾತ್ರಿ ಮಲಗುವ ಮುನ್ನ ಕಥೆ ಮತ್ತೇ ಕನಸಿನಲ್ಲಿ ಸುಳಿಯತೊಡಗುತ್ತ, ನಿಮ್ಮನ್ನು ಕಾಡತೊಡಗುತ್ತದೆ.
ಈ ಚಿತ್ರದಲ್ಲಿ ಎಲ್ಲಾ ಹೊಸಬರೇ ಅನ್ನೋ ಅಂಶ ಗಮನಿಸತಕ್ಕದ್ದು. ಈ ಇಂಡಸ್ಟ್ರಿಯಲ್ಲಿ ಪಳಗಿದವರಂತೆ ಯಾವ ಸಸ್ಪೆನ್ಸ ಥ್ರಿಲ್ಲರ್ ಗೂ ಕಡಿಮೆಯಿಲ್ಲದ ಅದ್ಭುತವಾದ ಸಿನಿಮಾ ಒಂದನ್ನು ನಮ್ಮ ಮುಂದಿಟ್ಟಿದ್ದಾರೆ. ಕಥೆಯ ನಿರೂಪಣೆ, ಅದಕ್ಕೆ ಬೇಕಾದ ಹಿನ್ನೆಲೆ ಮತ್ತು ಬಾಷೆ, ಸ್ಥಳ, ಕಲಾಕಾರರನ್ನು ಸಮಯ ಸಂದರ್ಭಾನುಸಾರವಾಗಿ ಬಳಿಸುತ್ತ ತೆರೆಯ ಮೇಲೆ ಕುತೂಹಲಬರಿತ ರಹಸ್ಯವೊಂದನ್ನು ಸೃಷ್ಟಿಸಿದ್ದಾರೆ.
ಅಜ್ಞಾತವಾಸದಲ್ಲಿ ಜೀವಿಸುತ್ತಿರುವ ಒಬ್ಬ ಕತೆಗಾರ, ಮತ್ತು ಆವಾಗಾವಾಗ ವಿಚಿತ್ರ ಕನಸೊಂದನ್ನು ಕಾಣುತ್ತ ಬೆಚ್ಚಿ ಬೀಳುವ ಅವನ ಗರ್ಬಿಣಿ ಹೆಂಡತಿ, ಇಬ್ಬರೂ ಹೆಂಡತಿ ಕಡೆಯ ಪೂರ್ವಿಕರು ಮೊದಲು ಮಾಡುತ್ತಿದ್ದ , ಹಲವಾರು ವರ್ಷಗಳಿಂದ ಮಾಡದೇ ನಿಲ್ಲಿಸಿದ ,ಭೂತಾರಾಧನೆಯನ್ನು ಮಾಡಲು 'ಕಮರೊಟ್ಟು' ಅನ್ನುವ ದಕ್ಷಿಣ ಕನ್ನಡದ ಕುಗ್ರಾಮದ ಹಳೇ ಮನೆಗೆ ಬರುತ್ತಾರೆ. ಈ ಊರೆ ಒಂದು ನಿಗೂಢವಾಗಿದ್ದರೆ, ಇಲ್ಲಿರುವ ಜನರೂ ವಿಚಿತ್ರ. ಈ ವಿಚಿತ್ರದಲ್ಲಿ ಇವರಿಬ್ಬರು ಭಾಗಿಯಾಗಿ ಕೊನೆಗೆ ಇದರ ಮೂಲವನ್ನು ಕಂಡುಹಿಡಿಯುತ್ತಾರೆ.
ಈ ಅಜ್ಞಾತ ಅನಾಮಧೇಯ ಲೇಖನನ ಜಾಡನ್ನು ಅರಿಯಲಿಕ್ಕೆ ಇವನ ಹಿಂದೆ ಬಿದ್ದ ಪತ್ರಕರ್ತೆಯೊಬ್ಬಳು, ಇದೆ ಗ್ರಾಮಕ್ಕೆ ಬರುತ್ತಾಳೆ. ಇವರನ್ನೆಲ್ಲರನ್ನು ಒಳಗೊಂಡ ರಹಸ್ಯವೊಂದು ಹಂತ ಹಂತವಾಗಿ ತೆರೆಯ ಮೇಲೆ ಬತ್ತಲಾಗುತ್ತ ಹೋಗುತ್ತದೆ.
ಕೆಲವೊಂದು ಹಾಡುಗಳು ಅನವಶ್ಯಕವೆನಿಸಿದರೂ, ಅದರಲ್ಲಿರುವ ಸಾಹಿತ್ಯ ಉತ್ತಮವಾಗಿದೆ. ಇಂಗ್ಲಿಷ್ ಇಲ್ಲಾ ಕಂಗ್ಲೀಷ ನ ಕಲಬೆರಕೆ ಇರದ ಶುದ್ಧ ಕಸ್ತೂರಿ ಕನ್ನಡದ ಬಳಕೆ ಇದೆ.
ನಿರ್ದೇಶಕ ಅನುಪ ಭಂಡಾರಿ , ತಮ್ಮ ಚೊಚ್ಚಲ ಪ್ರಯೋಗದಲ್ಲಿ ಗೆದ್ದಿದ್ದಾರೆ. ಈ ರೀತಿಯ ಪಕ್ಕಾ ಒರಿಜಿನಲ್ ಉತ್ತಮ ಕನ್ನಡ ಚಿತ್ರಗಳ ಬರಗಾಲವಿದ್ದ ಸಂದರ್ಭದಲ್ಲಿ ಇದೊಂದು ಓಯಸಿಸ್ ತರ ಕನ್ನಡ ಚಿತ್ರ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ನಟ ನಟಿಯರ ನಟನೆ ಚೆನ್ನಾಗಿದೆ, ಆದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗುವ ಆಸ್ಪದವಿದೆ.
ಚಿತ್ರ ಮುಗಿದರೂ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಉಳಿಯಬಹುದು, ಹಾಗಿದ್ದರೆ ಚಿತ್ರಮಂದಿರಕ್ಕೆ ಇನ್ನೊಂದು ಭೇಟಿ ಖಚಿತ ಮಾಡಿಕೊಳ್ಳಿ.
ಈ ಚಲನಚಿತ್ರ ನೋಡುವವರಿಗೆ ಒಂದು ಸೂಚನೆ. ಚಿತ್ರವನ್ನು ನೋಡುತ್ತ ಯಾವುದೋ ಫೋನ ಕರೆಗೋ ಇಲ್ಲಾ ಪ್ರಕೃತಿ ಕರೆಗೋ ನೀವು ಒಂದೈದು ನಿಮಿಷ ಹೊರಗೆ ಹೋಗಿ ಬಂದರೆ, ಮತ್ತೇ ಚಿತ್ರಕಥೆಗೆ ಹೊಂದಿಕೊಳ್ಳುವುದು ಬಲು ಕಷ್ಟ, ಯಾಕೆಂದರೆ ಕ್ಷಣ-ಕ್ಷಣಕ್ಕೂ ಊಹಿಸಲಾಗದಂತ ತಿರುವುಗಳಿಂದ ನೋಡುಗನನ್ನು ತನ್ನ ಸುಳಿಯಲ್ಲಿ ಬಂಧಿಸುತ್ತಾ ಸಾಗುತ್ತದೆ ಕಥೆ. ನನಗೂ ಸೀಟಿನಿಂದ ಏಳದೇ , ಕಣ್ಣು ಮತ್ತು ಮಿದುಳಿಗೆ ಕಸರತ್ತು ಕೊಡುತ್ತಾ ಕಥೆಯ ಜಾಡಿಗೆ ಹೊಂದುತ್ತಾ ಹೋಗುವ ಒತ್ತಡ ನಿರ್ಮಾಣವಾಗಿ, ಬೇರೆಲ್ಲ ಒತ್ತಡಗಳನ್ನು ತಾತ್ಕಾಲಿಕವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಥಿತಿ ಉದ್ಭವವಾಯಿತು. ಮೊದಮೊದಲು ಕಥೆಯು ನೋಡುಗನನ್ನು ಗೊಂದಲಕ್ಕೀಡು ಮಾಡಿ ಸಾಗಿದರೂ, ಬರಬರುತ್ತಾ ಕಥೆಯ ಎಳೆಗಳು ಒಂದೊಂದಾಗಿ ಬಿಚ್ಚಿ, ಈ ಗೊಂದಲವನ್ನು ದೂರ ಮಾಡಿ, 'ಓಹ್'...'ಅಬ್ಬಾ...' 'ಹೀಗೂ ಉಂಟೇ?' ಅನ್ನೋ ಆಶ್ಚರ್ಯ ಉವಾಚಗಳನ್ನು ತನಗರಿವಿಲ್ಲದೇ ಧಾರಾಳವಾಗಿ ಹೊರಹೊಮ್ಮುವಂತೆ ಮಾಡಿ ಚಿತ್ರ ಮುಕ್ತಾಯವಾಗುತ್ತದೆ, ಅದರ ನಂತರ ನಿಮ್ಮ ಬೇರೆ ಒತ್ತಡಗಳತ್ತ ಗಮನ ಹರಿಸಬಹುದು. ರಾತ್ರಿ ಮಲಗುವ ಮುನ್ನ ಕಥೆ ಮತ್ತೇ ಕನಸಿನಲ್ಲಿ ಸುಳಿಯತೊಡಗುತ್ತ, ನಿಮ್ಮನ್ನು ಕಾಡತೊಡಗುತ್ತದೆ.
ಈ ಚಿತ್ರದಲ್ಲಿ ಎಲ್ಲಾ ಹೊಸಬರೇ ಅನ್ನೋ ಅಂಶ ಗಮನಿಸತಕ್ಕದ್ದು. ಈ ಇಂಡಸ್ಟ್ರಿಯಲ್ಲಿ ಪಳಗಿದವರಂತೆ ಯಾವ ಸಸ್ಪೆನ್ಸ ಥ್ರಿಲ್ಲರ್ ಗೂ ಕಡಿಮೆಯಿಲ್ಲದ ಅದ್ಭುತವಾದ ಸಿನಿಮಾ ಒಂದನ್ನು ನಮ್ಮ ಮುಂದಿಟ್ಟಿದ್ದಾರೆ. ಕಥೆಯ ನಿರೂಪಣೆ, ಅದಕ್ಕೆ ಬೇಕಾದ ಹಿನ್ನೆಲೆ ಮತ್ತು ಬಾಷೆ, ಸ್ಥಳ, ಕಲಾಕಾರರನ್ನು ಸಮಯ ಸಂದರ್ಭಾನುಸಾರವಾಗಿ ಬಳಿಸುತ್ತ ತೆರೆಯ ಮೇಲೆ ಕುತೂಹಲಬರಿತ ರಹಸ್ಯವೊಂದನ್ನು ಸೃಷ್ಟಿಸಿದ್ದಾರೆ.
ಅಜ್ಞಾತವಾಸದಲ್ಲಿ ಜೀವಿಸುತ್ತಿರುವ ಒಬ್ಬ ಕತೆಗಾರ, ಮತ್ತು ಆವಾಗಾವಾಗ ವಿಚಿತ್ರ ಕನಸೊಂದನ್ನು ಕಾಣುತ್ತ ಬೆಚ್ಚಿ ಬೀಳುವ ಅವನ ಗರ್ಬಿಣಿ ಹೆಂಡತಿ, ಇಬ್ಬರೂ ಹೆಂಡತಿ ಕಡೆಯ ಪೂರ್ವಿಕರು ಮೊದಲು ಮಾಡುತ್ತಿದ್ದ , ಹಲವಾರು ವರ್ಷಗಳಿಂದ ಮಾಡದೇ ನಿಲ್ಲಿಸಿದ ,ಭೂತಾರಾಧನೆಯನ್ನು ಮಾಡಲು 'ಕಮರೊಟ್ಟು' ಅನ್ನುವ ದಕ್ಷಿಣ ಕನ್ನಡದ ಕುಗ್ರಾಮದ ಹಳೇ ಮನೆಗೆ ಬರುತ್ತಾರೆ. ಈ ಊರೆ ಒಂದು ನಿಗೂಢವಾಗಿದ್ದರೆ, ಇಲ್ಲಿರುವ ಜನರೂ ವಿಚಿತ್ರ. ಈ ವಿಚಿತ್ರದಲ್ಲಿ ಇವರಿಬ್ಬರು ಭಾಗಿಯಾಗಿ ಕೊನೆಗೆ ಇದರ ಮೂಲವನ್ನು ಕಂಡುಹಿಡಿಯುತ್ತಾರೆ.
ಈ ಅಜ್ಞಾತ ಅನಾಮಧೇಯ ಲೇಖನನ ಜಾಡನ್ನು ಅರಿಯಲಿಕ್ಕೆ ಇವನ ಹಿಂದೆ ಬಿದ್ದ ಪತ್ರಕರ್ತೆಯೊಬ್ಬಳು, ಇದೆ ಗ್ರಾಮಕ್ಕೆ ಬರುತ್ತಾಳೆ. ಇವರನ್ನೆಲ್ಲರನ್ನು ಒಳಗೊಂಡ ರಹಸ್ಯವೊಂದು ಹಂತ ಹಂತವಾಗಿ ತೆರೆಯ ಮೇಲೆ ಬತ್ತಲಾಗುತ್ತ ಹೋಗುತ್ತದೆ.
ಕೆಲವೊಂದು ಹಾಡುಗಳು ಅನವಶ್ಯಕವೆನಿಸಿದರೂ, ಅದರಲ್ಲಿರುವ ಸಾಹಿತ್ಯ ಉತ್ತಮವಾಗಿದೆ. ಇಂಗ್ಲಿಷ್ ಇಲ್ಲಾ ಕಂಗ್ಲೀಷ ನ ಕಲಬೆರಕೆ ಇರದ ಶುದ್ಧ ಕಸ್ತೂರಿ ಕನ್ನಡದ ಬಳಕೆ ಇದೆ.
ನಿರ್ದೇಶಕ ಅನುಪ ಭಂಡಾರಿ , ತಮ್ಮ ಚೊಚ್ಚಲ ಪ್ರಯೋಗದಲ್ಲಿ ಗೆದ್ದಿದ್ದಾರೆ. ಈ ರೀತಿಯ ಪಕ್ಕಾ ಒರಿಜಿನಲ್ ಉತ್ತಮ ಕನ್ನಡ ಚಿತ್ರಗಳ ಬರಗಾಲವಿದ್ದ ಸಂದರ್ಭದಲ್ಲಿ ಇದೊಂದು ಓಯಸಿಸ್ ತರ ಕನ್ನಡ ಚಿತ್ರ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ನಟ ನಟಿಯರ ನಟನೆ ಚೆನ್ನಾಗಿದೆ, ಆದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗುವ ಆಸ್ಪದವಿದೆ.
ಚಿತ್ರ ಮುಗಿದರೂ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಉಳಿಯಬಹುದು, ಹಾಗಿದ್ದರೆ ಚಿತ್ರಮಂದಿರಕ್ಕೆ ಇನ್ನೊಂದು ಭೇಟಿ ಖಚಿತ ಮಾಡಿಕೊಳ್ಳಿ.

No comments:
Post a Comment